NationalSpecial Stories

ತಾಯಿ ಕುರಿತು ಅವಹೇಳನಕರ ಹೇಳಿಕೆ -ಮೌನ ಮುರಿದ ಪ್ರಧಾನಿ-ಕಾಂಗ್ರೆಸನಿಂದ ರಾಷ್ಟ್ರದ ಮಹಿಳೆಯರಿಗೆ ಅವಮಾನ-Narendra Modi

ಈ ನಿಂದನೆಗಳಿಂದ ನನ್ನ ತಾಯಿಗೆ ಮಾತ್ರ ಅವಮಾನವಾಗಿಲ್ಲ ಇದು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಮೋದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ನಡೆದ ರಾಷ್ಟ್ರೀಯ ಜನತಾ ದಳ-ಕಾಂಗ್ರೆಸ್ ಜಂಟಿ ಕಾರ್ಯಕ್ರಮದ ವೇಳೆ ತಮ್ಮ ದಿವಂಗತ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನುನೀಡುವ ಮೂಲಕ ಕಾಂಗ್ರೆಸ್‌ ಪಕ್ಷವು ಭಾರತದಾದ್ಯಂತ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ .

Photo Credit- NBC NEWS

ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನಂತರ ಮೌನವಾಗಿದ್ದ ಮೋದಿ, ಇಂದು ಕೊನೆಗೂ ಮೌನ ಮುರಿದಿದ್ದಾರೆ. ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಏನಾಯಿತು ಎಂಬುದನ್ನು ನಾನು ಊಹಿಸಿರಲಿಲ್ಲ.

ಈ ಘಟನೆ ತಮಗೆ ಅತೀವ ನೋವು ತಂದಿದೆ. ಅವಹೇಳನ ಮಾಡಲು ತಮ್ಮ ತಾಯಿಯ ಏನು ತಪ್ಪು ಮಾಡಿದ್ದರು ಎಂದು ಪ್ರಶ್ನಿಸಿದರು.

ಈ ನಿಂದನೆಗಳಿಂದ ನನ್ನ ತಾಯಿಗೆ ಮಾತ್ರ ಅವಮಾನವಾಗಿಲ್ಲ ಇದು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಮೋದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ತಾಯಿಯ ಮೇಲೆ ಎಸಗಿದ ನಿಂದನೆಗಳನ್ನು ಕೇಳಿ ಬಿಹಾರದ ಜನರು ದುಃಖಿತರಾಗಿದ್ದಾರೆಂದು ತಮಗೆ ತಿಳಿದಿದೆ ಎಂದು ಹೇಳಿದರು. ನಮ್ಮ ಸರ್ಕಾರಕ್ಕೆ, ತಾಯಿಯ ಘನತೆ, ಅವರ ಗೌರವ ಮತ್ತು ಅವರ ಸ್ವಾಭಿಮಾನವು ಬಹಳ ಹೆಚ್ಚಿನ ಆದ್ಯತೆಯಾಗಿದೆ.

ತಾಯಿ ನಮ್ಮ ಜಗತ್ತು, ತಾಯಿ ನಮ್ಮ ಹೆಮ್ಮೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು, ಶ್ರೀಮಂತ ಸಂಪ್ರದಾಯಗಳಿಗೆ ಹೆಸರುವಾಸಿಯಾದ ಬಿಹಾರದಲ್ಲಿ ಕೆಲವು ದಿನಗಳ ಹಿಂದೆ ಏನಾಯಿತು ಎಂದು ನಾನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.

ನೀವೆಲ್ಲರೂ, ಬಿಹಾರದ ಪ್ರತಿಯೊಬ್ಬ ತಾಯಂದಿರೇ, ಇದನ್ನು ನೋಡಿದ ಮತ್ತು ಕೇಳಿದ ನಂತರ ಎಷ್ಟು ಕೆಟ್ಟದಾಗಿ ಭಾವಿಸಿದ್ದೀರಿ ಎಂದು ನನಗೆ ತಿಳಿದಿದೆ.

ನನ್ನ ಹೃದಯದಲ್ಲಿ ಎಷ್ಟು ನೋವಿದೆಯೋ, ಬಿಹಾರದ ಜನರು ಸಹ ಅದೇ ನೋವಿನಲ್ಲಿದ್ದಾರೆ ಎಂದು ನನಗೆ ತಿಳಿದಿದೆ” ಎಂದು ಪ್ರಧಾನಿ ಮೋದಿ ಭಾವುಕರಾಗಿ ನುಡಿದರು. ಹೇಳಿದರು.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button