ತಿಂಗಳಾದರೂ ತರಗತಿಗಳೇ ನಡೆಯುತ್ತಿಲ್ಲ-ಬಾಪೂಜಿ ಸಕಾ೯ರಿ ಪದವಿ ಕಾಲೇಜು ವಿದ್ಯಾಥಿ೯ಗಳ ಆಕ್ರೋಶ-ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ
ಎರಡು ತಿಂಗಳಿಂದ ತರಗತಿಗಳು ನಡೆಯದ ಕಾರಣ ರೋಸಿ ಹೋಗಿದ್ದ ವಿದ್ಯಾಥಿ೯ಗಳ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ, ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ವಿದ್ಯಾಥಿ೯ಗಳಿಂದ ಮನವಿ ಪತ್ರ ಸ್ವೀಕರಿಸಿದರು. ಉಪನ್ಯಾಸಕರ ಶೀಘ್ರ ನೇಮಕಾತಿಗೆ ಆಗ್ರಹಿಸಿ ನೀಡಿದ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಭರವಸೆ ನೀಡಿದರು.

ಉಪನ್ಯಾಸಕರು ಇಲ್ಲದ ಪರಿಣಾಮ ಸರಿಯಾಗಿ ಪಾಠಗಳು ನಡೆಯುತ್ತಿಲ್ಲ ಎಂದು ಆರೋಪಿಸಿ, ಶಿವಮೊಗ್ಗದ ಬಾಪೂಜಿ ಸಕಾ೯ರಿ ಪದವಿ ಕಾಲೇಜಿನ ವಿದ್ಯಾಥಿ೯ಗಳು ಶುಕ್ರವಾರದಂದು ರಸ್ತೆ ತಡೆ ನಡೆಸಿದ್ದಲ್ಲದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಕಾಲೇಜು ವಿದ್ಯಾಥಿ೯ಗಳು ಭಾಗವಹಿಸಿದ್ದರು. ಕಾಲೇಜು ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ, ಈವರೆಗೆ ತರಗತಿಗಳು ನಡೆದಿಲ್ಲ.
ಸೆಮಿಸ್ಟರ್ ಪರೀಕ್ಷೆ ದಿನಾಂಕ ಪ್ರಕಟವಾಗಿದೆ ಆದರೆ ವಿಷಯಗಳ ಬೋಧನೆ ಇಲ್ಲದೇ ವಿದ್ಯಾಥಿ೯ಗಳಿಗೆ ಏನು ಅಥ೯ವಾಗುತ್ತಿಲ್ಲ. ಈ ಮಧ್ಯೆ ದೂರದೂರುಗಳಿಂದ ಬರುವ ವಿದ್ಯಾರ್ಥಿಗಳು, ಪಾಠಗಳು ನಡೆಯದ ಕಾರಣ , ವ್ಯರ್ಥವಾಗಿ ಕಾಲೇಜಿಗೆ ಬಂದು ಹೋಗುವಂತಾಗಿದೆ.

ಇನ್ನು ಉಪನ್ಯಾಸಕರೇ ಇಲ್ಲದಿದ್ರೆ ಪಾಠ ಹೇಗೆ ಕಲಿಯಬೇಕು? ಪರೀಕ್ಷೆ ಬರೆಯೋದು ಹೇಗೆ ಎಂಬ ವಿದ್ಯಾಥಿ೯ಗಳ ಕಳವಳ ಇಂದು ಆಕ್ರೋಶಕ್ಕೆ ತಿರುಗುವಂತಾಗಿತ್ತು.
ಉಪನ್ಯಾಸಕರ ನೇಮಕಾತಿ ಆಗದೇ ಇರುವ ಕಾರಣ, ತರಗತಿಗಳು ನಡೆಯುತ್ತಿಲ್ಲ ಎಂಬುದೇ ವಿದ್ಯಾಥಿ೯ಗಳ ಇಂದಿನ ಹೋರಾಟಕ್ಕೆ ಮುಖ್ಯವಾಗಿ ಕಾರಣವಾಗಿತ್ತು.
ಎರಡು ತಿಂಗಳಿಂದ ತರಗತಿಗಳು ನಡೆಯದ ಕಾರಣ ರೋಸಿ ಹೋಗಿದ್ದ ವಿದ್ಯಾಥಿ೯ಗಳ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ, ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ವಿದ್ಯಾಥಿ೯ಗಳಿಂದ ಮನವಿ ಪತ್ರ ಸ್ವೀಕರಿಸಿದರು.
ಉಪನ್ಯಾಸಕರ ಶೀಘ್ರ ನೇಮಕಾತಿಗೆ ಆಗ್ರಹಿಸಿ ನೀಡಿದ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಭರವಸೆ ನೀಡಿದರು.

ಸಾವಿರಾರು ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೇ, ಸ್ಥಳಕ್ಕೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ಕುಮಾರ್ ಆಗಮಿಸಿದರು.
ಪ್ರತಿಭಟನಾ ನಿರತ ವಿದ್ಯಾಥಿ೯ಗಳ ಸಮಸ್ಯೆಗಳನ್ನ ಡಿಸಿ ಮೂಲಕ ಸರ್ಕಾರಕ್ಕೆ ತಲುಪಿಸಲು ಸಹಕಾರ ನೀಡುವುದಾಗಿ ಹೇಳಿದರು.

ಸಕಾ೯ರದ ನಿಲ೯ಕ್ಷ್ಯ-ಬೀದಿಗಳಿದ ವಿದ್ಯಾಥಿ೯ಗಳು
ರಾಜ್ಯಾದ್ಯಂತ ಕಾಲೇಜು ಶಿಕ್ಷಣ ಇಲಾಖೆಯಡಿ 432 ಪದವಿ ಕಾಲೇಜುಗಳಿವೆ ಅದ್ರಲ್ಲಿ 6 ಸಾವಿರ ಖಾಯಂ ಉಪನ್ಯಾಸಕರಿದ್ದು 3 ಸಾವಿರ ಖಾಯಂ ಉಪನ್ಯಾಸಕರು ನಿವೃತ್ತರಾಗಿದ್ದಾರೆ.. ಉಳಿದಿರುವ ಮೂರುಸಾವಿರ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರ ನೆರವಿನಿಂದ ಪದವಿ ತರಗತಿಗಳು ನಡೆಯುತ್ತಿದೆ..

ಪ್ರಸಕ್ತ ಸಾಲಿನಲ್ಲಿ 12 ಸಾವಿರ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ವಿಳಂಬ ಮತ್ತು ರಾಜ್ಯ ಸರ್ಕಾರ ಖಾಯಂ ಉಪನ್ಯಾಕರ ನೇಮಕಕ್ಕೆ ನಿರ್ಲಕ್ಷ ಧೋರಣೆ ತಾಳಿರುವುವುದು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ ಅನ್ನೋದು ಎಬಿವಿಪಿ ಗಂಭೀರ ಆರೋಪ ಮಾಡಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು.
ಅತಿಥಿ ಉಪನ್ಯಾಸಕರ ನೇಮಕಾತಿ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡು ಉಪನ್ಯಾಕರ ಕೊರತೆ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂಬುದು ಪ್ರತಿಭಟನಾನಿರತ ಪದವಿ ವಿದ್ಯಾರ್ಥಿಗಳು ಆಗ್ರಹಿಸಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


