ಶ್ರೀ ಮಹೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿ (ಬ್ಯಾಂಕ್) ಅಧ್ಯಕ್ಷರಾಗಿ ಬಂಗಾರೇಶ್ ಹಿರೇಮಠ ಆಯ್ಕೆ
ಭಾರಿ ಮತಗಳಿಂದ ಗೆಲುವು ಸಾಧಿಸಿದ ಬಂಗಾರೇಶ್ ಹಿರೇಮಠ

ಹುಬ್ಬಳ್ಳಿ ನಗರದ ಜಂಗಮ ಸಮುದಾಯದ ಪ್ರತಿಷ್ಠಿತ ಶ್ರೀ ಮಹೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ ( ಬ್ಯಾಂಕಿನ ) ಪದಾಧಿಕಾರಿಗಳ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡ ಬಂಗಾರೇಶ್ ಹಿರೇಮಠ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗುರುವಾರದಂದು ನಡೆದ ಚುನಾವಣೆಯಲ್ಲಿ ಪ್ರತಿಸ್ಪದಿ೯ಯಾಗಿದ್ದ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರನ್ನು ಭಾರಿ ಮತಗಳಿಂದ ಪರಾಭವಗೊಳಿಸಿರುವ ಬಂಗಾರೇಶ ಹಿರೇಮಠ ಆ ನಂತರ ಸೊಸಾಯಿಟಿ ಕಚೇರಿಯಲ್ಲಿ ಅಧಿಕಾರ ಗ್ರಹಣ ಮಾಡಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಗಿರಿಮಠ ಹಾಗೂ ಗೌರಾದೇವಿ ಸಾಲಿಮಠ ನಡುವೆ ನಡೆದ ಸ್ಪರ್ಧೆಯಲ್ಲಿ ಶ್ರೀಮತಿ ಗೌರಾದೇವಿ ಸಾಲಿಮಠ ರವರು ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನ ನಡೆದ ಆಡಳಿತ ಮಂಡಳಿಯ ನಿದೇ೯ಶಕರ ಚುನಾವಣೆಯಲ್ಲಿ ಸ್ಪಧಿ೯ಸಿದ್ದ ಬಂಗಾರೇಶ್ ಹಿರೇಮಠ ಸೇರಿದಂತೆ ವೀರಭದ್ರಯ್ಯ ಹಿರೇಹಾಳ , ಪ್ರಭು ನವಲಗುಂದಮಠ , ಡಾ ವಿಜಯಕುಮಾರ ಶಾಸ್ತ್ರೀಮಠ , ಪರಮೇಶ್ವರಯ್ಯ ಚಿಕ್ಕಮಠ , ಜಗದೀಶ ಅಡವಿಮಠ , ಮಹಾಂತೇಶ ಗಿರಿಮಠ , ಚನ್ನಯ್ಯ ಚೌಕಿಮಠ , ನಿರಂಜನ ಹಿರೇಮಠ , ರತ್ನಾ ಸಾಲಿಮಠ ಅವರುಗಳ ವಿರುದ್ದ ಪ್ರತಿಸ್ಪಧಿ೯ಗಳು ಇರದ ಕಾರಣ ಎಲ್ಲರು ಅವಿರೋಧವಾಗಿ ಆಯ್ಕೆಯಾದರು.
ವೀರಶೈವ ಜಂಗಮ ಸಮುದಾಯದ ನಾಯಕ ಬಂಗಾರೇಶ್ ಹಿರೇಮಠ

ಹುಬ್ಬಳ್ಳಿ ನಗರದ ಜಂಗಮ ಸಮುದಾಯದ ಪ್ರತಿಷ್ಠಿತ ಶ್ರೀ ಮಹೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯ ಕಾಂಗ್ರೆಸ್ ಮುಖಂಡ ಬಂಗಾರೇಶ್ ಹಿರೇಮಠ ವಿದ್ಯಾಥಿ೯ ದೆಸೆಯಿಂದಲೇ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲಾ ವಿದ್ಯಾಥಿ೯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯ ಹಾಗು ಸಾಮಾಜಿಕ ಸೇವೆಗೆ ಧುಮುಕಿದಾಗ ಅವರಿಗೆ ಕೇವಲ ೧೮ ವರಷ ಮಾತ್ರ.
ಹಾಲಿ ಕೆಪಿಸಿಸಿ ಸಂಯೋಜಕರಾಗಿರುವ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ವೀಕ್ಷಕರಾಗಿ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ಕೈಗೊಂಡ ಪರಿಣಾಮ ಕಳೆದ ೩೦ ವರುಷಗಳಿಂದ ಅನ್ಯ ಪಕ್ಷಗಳ ಪಾಲಾಗಿದ್ದ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ಯಶಸ್ವಿಯಾಗಿದ್ದರು. ಇದೇ ವೇಳೆ ಕೇರಳದ ರಾಜ್ಯದಲ್ಲಿಯು ಸಹ ಕಾಂಗ್ರೆಸ್ ವೀಕ್ಷಕರಾಗಿ ಕಾಯನಿವ೯ಹಿಸಿದ್ದ ಬಂಗಾರೇಶ್ ಹಿರೇಮಠ ಅವರನ್ನು ಖುದ್ದು ಲೋಕಸಭಾ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಬಂಗಾರೇಶ್ ಹಿರೇಮಠ ಅವರ ಕಾಯ೯ಶೈಲಿಯನ್ನು ಕೊಂಡಾಡಿದ್ದರು.

ಅಖಿಲ್ ಭಾರತ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾಜ೯ನ್ ಖಗೆ೯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬಂಗಾರೇಶ ಹಿರೇಮಠ ಅವರಿಗೆ ಕಳೆದ ಚುನಾವಣೆಯಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೊನೆಗಳಿಗೆಯಲ್ಲಿ ಕೈ ತಪ್ಪಿತ್ತು. ೨೦೧೮ರ ಚುನಾವಣೆಯಲ್ಲಿ ಸಂತೋಷ್ ಲಾಡ್ ಸೋಲಿನ ನಂತರ ಕಾಂಗ್ರೆಸ್ ಹೈಕಮಾಂಡ ಬಂಗಾರೇಶ್ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿತ್ತು. ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದರೂ ಸಹ ಆ ನಂತರ ಸಂತೋಷ್ ಲಾಡ್ ಅವರ ಪರ ಪ್ರಚಾರ ಕೈಗೊಂಡು ಬಿಜೆಪಿ ಪಾಲಾಗಿದ್ದ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು ಎಂದು ಕಾಂಗ್ರೆಸ್ ವಲಯದಲ್ಲಿನ ಮಾತು.
ಜಂಗಮ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಹೊರ ಹೊಮ್ಮುತ್ತಿರುವ ಬಂಗಾರೇಶ್ ಹಿರೇಮಠ ಅವರಿಗೆ ಮುಂದಿನ ಧಾರವಾಡ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿ೯ಸುವಂತೆ ಕಾಂಗ್ರೆಸ್ ಹೈಕಮಾಂಡ ಅವರಿಗೆ ಸೂಚಿಸಿದ ಎನ್ನಲಾಗಿದೆ.



