Bengaluru UrbanDistrictKarnatakaPoliticalSpecial Stories

Voter Adhikar Yatra-ರಾಹುಲ್‌ ಗಾಂಧಿ ಹೋರಾಟಕ್ಕೆ ಮೊದಲ ಗೆಲುವು-ಕನಾ೯ಟಕದಲ್ಲಿ ಇನ್ನು”ಬ್ಯಾಲೆಟ್‌ ಪೇಪರ” ಮತದಾನ

ಕನಾ೯ಟಕ ರಾಜ್ಯದಲ್ಲಿ ಇವಿಎಂ ಬದಲು ಮತಪತ್ರ ( ಬ್ಯಾಲೆಟ್‌ ಪೇಪರ್‌ ) ಬಳಕೆಗೆ ರಾಜ್ಯ ಸಚಿವ ಸಂಪುಟ ನಿಧ೯ರಿಸಿದೆ. ಈ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೋರಾಟಕ್ಕೆ ಸಿದ್ದರಾಮಯ್ಯ ಸಕಾ೯ರ ಸಾಕ್ಷಾತ ಬೆಂಬಲ ಘೋಷಿಸಿದೆ.

ಕೇಂದ್ರ ಚುನಾವಣಾ ಆಯೋಗದ ವಿರುದ್ದ ಮತಗಳ್ಳತನ ಹಾಗೂ ವಿದ್ಯುನ್ಮಾನ ಮತಯಂತ್ರ ಇವಿಎಂ ವಂಚನೆಯಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರಾದ್ಯಂತ ಪ್ರತಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೋರಾಟಕ್ಕೆ ಕೊನೆಗೂ ಮೊದಲ ಹಂತದ ಗೆಲುವು ಸಿಕ್ಕಿದೆ.

ಕನಾ೯ಟಕ ರಾಜ್ಯದಲ್ಲಿ ಇವಿಎಂ ಬದಲು ಮತಪತ್ರ ( ಬ್ಯಾಲೆಟ್‌ ಪೇಪರ್‌ ) ಬಳಕೆಗೆ ರಾಜ್ಯ ಸಚಿವ ಸಂಪುಟ ನಿಧ೯ರಿಸಿದೆ. ಈ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೋರಾಟಕ್ಕೆ ಸಿದ್ದರಾಮಯ್ಯ ಸಕಾ೯ರ ಸಾಕ್ಷಾತ ಬೆಂಬಲ ಘೋಷಿಸಿದೆ.

ಈ ಕುರಿತು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲು ಸಹ ರಾಜ್ಯ ಸಕಾ೯ರ ಮುಂದಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ತಿಳಿಸಿದ್ದಾರೆ.

ಗುರುವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳು ಮತ್ತು ನಗರ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಹಾಗು ತಾಲೂಕಾ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಬ್ಯಾಲೆಟ್‌ ಪೇಪರ ಬಳಕೆಗೆ ತೀಮಾ೯ನಿಸಿದೆ.

ಇನ್ನು ಬರಲಿರುವ ಆಯಾ ವ್ಯಾಪ್ತಿಯ ಚುನಾವಣೆಗಳ ಮತದಾರರ ಯಾದಿಯನ್ನು ಸಮಗ್ರವಾಗಿ ಪರಿಶೀಲಿಸಲು ರಾಜ್ಯ ಚುನಾವಣೆ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆ ಪ್ರಕಾರ, ರಾಜ್ಯ ಸಕಾ೯ರ ಏನೇ ತೀಮಾ೯ನ ಕೈಗೊಂಡರೂ, ಸಂವಿಧಾನ ಬದ್ದ ಸಂಸ್ಥೆಯಾದ ಚುನಾವಣಾ ಆಯೋಗವು ಸಕಾ೯ರದ ನೀಡುವ ಶಿಫಾರಸುಗಳನ್ನು ಭಾಗಶಃ ಒಪ್ಪಬಹುದು ಅಥವಾ ತಿರಸ್ಕರಿಸಬಹುದು.

ಈ ಹಿನ್ನಲೆಯಲ್ಲಿ ರಾಜ್ಯ ಸಕಾ೯ರವು ಒಂದು ಹೆಜ್ಜೆ ಮುಂದಿಟ್ಟಿದೆ. ಮತದಾರರ ಯಾದಿ, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿರುವ ರಾಜ್ಯ ಸಕಾ೯ರವು, ಈ ಅಧ್ಯಾದೇಶಕ್ಕೆ ರಾಜ್ಯಪಾಲರ ಒಪ್ಪಿಗೆ ಪಡೆದು ಸಂವಿಧಾನಾತ್ಮಕವಾಗಿ ಸಿಗುವ ಅವಕಾಶ ಬಳಸಿಕೊಳ್ಳಲು ಜಾಣ ಹೆಜ್ಜೆ ಇಡ1ಲು ಸಿದ್ದರಾಮಯ್ಯ ಸಕಾ೯ರ ಮುಂದಾಗಿದೆ.

ಈ ಮೂಲಕ ಹೊಸದಾಗಿ ಮತದಾರರ ಕರಡು ಪಟ್ಟಿಯನ್ನು ತಯಾರಿಸಲು ನಿಧ೯ರಿಸಿರುವ ಸಕಾ೯ರ, ಇನ್ನು ಚುನಾವಣೆಗೆ ಸಂಬಂಧಿಸಿದಂತೆ,

ಈ ಮೂಲಕ ಇವಿಎಂ ಬದಲು ಮತಪತ್ರ ಮುಖೇನ ಚುನಾವಣೆ ನಡೆಸಲು ಯಾವುದೆ ಕಾನೂನು ಅಡ್ಡಿ ಬರದಂತೆ , ಜಾಣ ರಹದಾರಿಗೆ ಮಾಡಿಕೊಳ್ಳಲು ರಾಜ್ಯ ಸಕಾ೯ರ ಮುಂದಾಗಿದೆ.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button