KarnatakaShivamogga

ಕಾಂಗ್ರೆಸ್ ಸರ್ಕಾರದಿಂದ ನಿರುದ್ಯೋಗಿಗಳ ಭವಿಷ್ಯಕ್ಕೆ ಕೊಳ್ಳಿ|ಕೆಪಿಎಸ್‌ಸಿ ನೇಮಕಾತಿ ಹಗರಣದಿಂದ ಅಧೋಗತಿ|ಡಿಕೆಶಿ ಸರ್ಕಾರದ ವಿರುದ್ದ ಡಾ.ಧನಂಜಯ್‌ ಸರ್ಜಿ ಆಕ್ರೋಶ

ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಗೊಂದಲದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿದ್ಯಾರ್ಥಿಗಳು ಉಪವಾಸ ಮಾಡಿ ಲಾಠಿಚಾರ್ಜ್ ಆದ ಬಳಿಕ ರಾಜೀನಾಮೆ ನೀಡುತ್ತೇನೆಂಬ ಹೇಳಿಕೆಯನ್ನು ವಿಧಾನಪರಿಷತ್‌ ಸದಸ್ಯ ಹಿರಿಯ ಬಿಜೆಪಿ ಮುಖಂಡ ಡಾ.ಧನಂಧಯ್ ಸರ್ಜಿ ಖಂಡಿಸಿದರು.

ಶಿವಮೊಗ್ಗ: ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ, ಸರ್ಕಾರಿ ಹುದ್ದೆ ಭರ್ತಿ ವಿಳಂಬ ಬಗ್ಗೆ ಅಭ್ಯರ್ಥಿಗಳ ಆಕ್ರೋಶ, ನೋವಿಗೆ ರಾಜ್ಯ ಸರ್ಕಾರವು ಸ್ಪಂದಿಸುತ್ತಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಹಿರಿಯ ಬಿಜೆಪಿ ಮುಖಂಡ ಡಾ.ಧನಂಧಯ್ ಸರ್ಜಿ ಆರೋಪಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ್ ನೀಟ್ ವಿದ್ಯಾರ್ಥಿಗಳಿಗೆ ನ್ಯಾಯಕೊಡಿಸಲು ದೆಹಲಿಗೆ ಹೋಗಿ ಹೋರಾಡುತ್ತಾರೆ.

ಆದರೆ ರಾಜ್ಯದ ವಿದ್ಯಾರ್ಥಿ ಸಮಸ್ಯೆಗಳು ಹಾಗೂ ನೇಮಕಾತಿಯಲ್ಲಿನ ಹಗರಣ ಅವರಿಗೆ ಕಣ್ಣಿಗೆ ಕಾಣುತ್ತಿಲ್ಲ ಎಂದು ಡಾ.ಧನಂಧಯ್ ಸರ್ಜಿ ಕಿಡಿಕಾರಿದರು.

ಕೆಪಿಎಸ್‌ಸಿ ಎಂದರೆ ಕ್ಯಾಶ್ ಪೋಸ್ಟ್ ಸೆಟಲ್‌ಮೆಂಟ್ ಮಾಡುವ ಕಾಂಗ್ರೆಸ್ ಪಾರ್ಟಿ ಎನ್ನುವಂತಾಗಿದೆ ಎಂದು ಡಾ.ಧನಂಧಯ್ ಸರ್ಜಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳ ಸತತ ಹೋರಾಟದ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

ಸಾಂದರ್ಭಿಕ ಎಐ ಚಿತ್ರ

ಎಲ್ಲಾ ಪರೀಕ್ಷೆಗಳು ನ್ಯಾಯಯುತವಾಗಿ ಪಾರದರ್ಶಕವಾಗಿ ನಡೆಯುತ್ತಿಲ್ಲ, ಅದಕ್ಕೆ ಪಶುವೈದ್ಯಕೀಯ ನೇಮಕಾತಿ ಹಗರಣವೇ ತಾಜಾ ಉದಾಹರಣೆ ಎಂದು ಡಾ.ಧನಂಧಯ್ ಸರ್ಜಿ ಹೇಳಿದರು.

ಈ ಹಿಂದೆ ನಡೆದ ಕೆಎಎಸ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಪ್ರಶ್ನೆಪತ್ರಿಯಲ್ಲಿ ಗೊಂದಲ ತಪ್ಪುಗಳಾಗಿ ಮರುಪರೀಕ್ಷೆ ನಡೆಸಿದರೂ ಕೂಡ ಕನ್ನಡ ಅನುವಾದದಲ್ಲಿ ನೂರಾರು ತಪ್ಪುಗಳಿಂದಾಗಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಯ್ಕೆಪ್ರಕ್ರಿಯೆಯಲ್ಲಿ ಅನ್ಯಾಯವಾಗಿತ್ತು ಎಂದರು.

ಪಿಡಿಒ, ಜೆಇ, ಎಇಇ, ಪರೀಕ್ಷೆ ಗಳಲ್ಲೂ ಸಾಲು ಸಾಲು ಹಗರಣ, ಕೆಪಿಎಸ್ಸಿ ಭ್ರಷ್ಟಾಚಾರ ಕುರಿತು ಒಂದು ಪುಸ್ತಕವೇ ಬರೆಯಬಹುದೆಂದು ಡಾ.ಧನಂಜಯ್ ಸರ್ಜಿ ವ್ಯಂಗ್ಯವಾಡಿದರು.

ಇತ್ತೀಚೆಗೆ ನಡೆದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಗೊಂದಲದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿದ್ಯಾರ್ಥಿಗಳು ಉಪವಾಸ ಮಾಡಿ ಲಾಠಿಚಾರ್ಜ್ ಆದ ಬಳಿಕ ರಾಜೀನಾಮೆ ನೀಡುತ್ತೇನೆಂಬ ಹೇಳಿಕೆಯನ್ನು ವಿಧಾನಪರಿಷತ್‌ ಸದಸ್ಯ ಹಿರಿಯ ಬಿಜೆಪಿ ಮುಖಂಡ ಡಾ.ಧನಂಧಯ್ ಸರ್ಜಿ ಖಂಡಿಸಿದರು.

ಪ್ರಾಧ್ಯಾಪರ ನೇಮಕಾತಿ ವೇಳೆ ನಕಲಿ ಪಿಹೆಚ್‌ಡಿ ಪ್ರಮಾಣಪತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಅಕ್ರಮದಲ್ಲಿ ಪತ್ತೆಯಾದವರ ಪೈಕಿ 140 ಮಂದಿ ಕಲ್ಬುರ್ಗಿಯವರೇ ಆಗಿದ್ದಾರೆ ಇದಕ್ಕೆ ಪ್ರಿಯಾಂಕ್ ಖರ್ಗೆ ಕುಮ್ಮಕು ಇದೆಯಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ನಿರುದ್ಯೋಗಿಗಳ ಭವಿಷ್ಯಕ್ಕೆ ಕೊಳ್ಳಿ ಇಡದೇ ಕ್ಯಾಶ್ ಪೇಮೆಂಟ್ ಆದ್ರೆ ಹುದ್ದೆ ಗ್ಯಾರಂಟಿ ಎಂಬ ಮಂತ್ರ ಕೈಬಿಟ್ಟು ಪಾರದರ್ಶಕ ಪರೀಕ್ಷೆ, ನೇಮಕಾತಿಗೆ ಆದ್ಯತೆ ನೀಡಬೇಕೆಂದು ಡಾ.ಧನಂಜಯ್ ಸರ್ಜಿ ಒತ್ತಾಯಿಸಿದರು.

ಕೆಪಿಎಸ್ಸಿ ನೇಮಕಾತಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯದೇ ಅನುತ್ತೀರ್ಣಗೊಂಡವರು ಆಯ್ಕೆಪಟ್ಟಿಯಲ್ಲಿದ್ದಾರೆ. ಅಕ್ರಮಕ್ಕೆ ಸಂಬಂಧಿಸಿದ ಇಬ್ಬರು ದಲ್ಲಾಳಿಗಳು ಸಿಕ್ಕಿಬಿದ್ದಿದ್ದರೂ ಕ್ರಮವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸೇವಾ ಆಯೋಗದಂತೆ ಕೆಪಿಎಸ್ಸಿ ಪರೀಕ್ಷೆಯ ಸುಧಾರಾಣೆಗಾಗಿ ಹೋಟಾ ಕಮಿಟಿ ವರದಿ ಜಾರಿಗೆ ತರಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ, ದರ್ಶನ್, ಜಿಲ್ಲಾ ಮಾಧ್ಯಮ ಪ್ರಮುಖ್ ಚಂದ್ರಶೇಖರ್, ಸಹಪ್ರಮುಖ್ ಮಂಜುನಾಥ್ ಎನ್, ಜಿಲ್ಲಾ ಸಾಮಾಜಿಕ ಜಾಲತಾಣದ ಶರತ್ ಕಲ್ಯಾಣಿ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button