Mysuru: ಸಮಾಜದ ಏಳಿಗೆಗಾಗಿ ಸುತ್ತೂರು ಮಠದ ಕೊಡುಗೆ ಅಪಾರ|ಒಗ್ಗಟ್ಟು ಮತ್ತು ಸಾಮರಸ್ಯವನ್ನು ಜಗತ್ತಿಗೆ ಸಾರುತ್ತಿರುವ ಸುತ್ತೂರು ಜಾತ್ರೆ-ಬಿ.ವೈ.ವಿಜಯೇಂದ್ರ
ಶ್ರದ್ಧೆ, ಸಂಸ್ಕೃತಿ ಮತ್ತು ದಾಸೋಹದ ಪವಿತ್ರ ಸಂಗಮವಾಗಿರುವ ಸುತ್ತೂರು ಶ್ರೀಕ್ಷೇತ್ರವು, ಲಕ್ಷಾಂತರ ಭಕ್ತರ ದನಿಯಾಗಿದೆ. ಅನ್ನದಾತನ ಶ್ರಮವನ್ನು ಗೌರವಿಸುವ ಸುಗ್ಗಿಯ ಸಂಭ್ರಮವಾಗಿ ಈ ಜಾತ್ರೆ ನಾಡಿನ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಜಗತ್ತಿಗೆ ಸಾರುತ್ತಿದೆ ಎಂದರು.

ಮೈಸೂರು: ಸಮಾಜದ ಏಳಿಗೆಗಾಗಿ ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸುತ್ತೂರು ಮಠವು ನೀಡುತ್ತಿರುವ ಕೊಡುಗೆ ಅಪಾರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ರಾಘವೇಂದ್ರ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶ್ರದ್ಧೆ, ಸಂಸ್ಕೃತಿ ಮತ್ತು ದಾಸೋಹದ ಪವಿತ್ರ ಸಂಗಮವಾಗಿರುವ ಸುತ್ತೂರು ಶ್ರೀಕ್ಷೇತ್ರವು, ಲಕ್ಷಾಂತರ ಭಕ್ತರ ದನಿಯಾಗಿದೆ. ಅನ್ನದಾತನ ಶ್ರಮವನ್ನು ಗೌರವಿಸುವ ಸುಗ್ಗಿಯ ಸಂಭ್ರಮವಾಗಿ ಈ ಜಾತ್ರೆ ನಾಡಿನ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಜಗತ್ತಿಗೆ ಸಾರುತ್ತಿದೆ ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಈ ಅಧ್ಯಾತ್ಮಿಕ, ಸಾಂಸ್ಕೃತಿಕ ಸೊಗಡಿನ ಉತ್ಸವದಲ್ಲಿ ಪಾಲ್ಗೊಂಡು, ಅವರಿಂದ ಆಶೀರ್ವಾದ ಪಡೆದಿದ್ದು, ಮನಸ್ಸಿಗೆ ಶಾಂತಿ ಮತ್ತು ಚೈತನ್ಯ ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಬಸವಕುಮಾರ ಸ್ವಾಮೀಜಿಗಳು, ಪೂಜ್ಯ ಶ್ರೀ ಅವಧೂತ ಅರ್ಜುನ್ ಗುರೂಜಿ, ಕೇರಳದ ಸ್ವಾಮಿ ಪ್ರಭಾಕರಾನಂದ ಸರಸ್ವತಿ ಮಹಾರಾಜ್, ಮೈಸೂರು ಜಿಲ್ಲಾಧ್ಯಕ್ಷ ಶ್ರೀ ನಾಗೇಂದ್ರ, ಮೈಸೂರು ಗ್ರಾಮಾಂತರ ಅಧ್ಯಕ್ಷ ಶ್ರೀ ಕುಂಬರಳ್ಳಿ ಸುಬ್ಬಣ್ಣ ಮತ್ತಿತರ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.
ವರದಿ: ನ್ಯೂಸ್ ಡೆಸ್ಕ್
ನ್ಯೂಇಂಡಿಯಾ ಕನ್ನಡ
ಬೆಂಗಳೂರು.







