DistrictShivamogga
ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಗೆ ಸಿಲುಕಿ ನರಳಾಡಿ ಸತ್ತ ಹಸುಗಳು- ಶಿವಮೊಗ್ಗ ಬಳಿ ಕ್ಯಾತಿನಕೊಪ್ಪದಲ್ಲಿ ಹೃದಯವಿದ್ರಾವಕ ಘಟನೆ
ಕರು ಹಾಕುವ ಸ್ಥಿತಿಯಲ್ಲಿದ್ದ ಎರಡು ಹಸುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹೊರಬಾರದೇ ಒದ್ದಾಡಿ ಸಾವನ್ನಪ್ಪಿವೆ. ಮನೆಯ ಹಿಂಭಾಗದಲ್ಲಿದ್ದ ಅಡಿಕೆ ದಬ್ಬೆಯಿಂದ ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ಹೇಗೆ ಬಿತ್ತು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ.

ಕೊಟ್ಟಿಗೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಎರಡು ಹಸುಗಳು ಜೀವಂತ ದಹನಗೊಂಡ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಹೊರವಲಯದಲ್ಲಿ ನಡೆದಿದೆ.
ತಾಲೂಕಿನ ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತಿನಕೊಪ್ಪದಲ್ಲಿ ಸಂತೋಷ್ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಬುಧವಾರ ಬೆಳಗಿನ ಜಾವ ಬೆಂಕಿ ಬಿದ್ದಿದೆ.
ಕರು ಹಾಕುವ ಸ್ಥಿತಿಯಲ್ಲಿದ್ದ ಎರಡು ಹಸುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹೊರಬಾರದೇ ಒದ್ದಾಡಿ ಸಾವನ್ನಪ್ಪಿವೆ. ಮನೆಯ ಹಿಂಭಾಗದಲ್ಲಿದ್ದ ಅಡಿಕೆ ದಬ್ಬೆಯಿಂದ ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ಹೇಗೆ ಬಿತ್ತು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ.
ವರದಿ: ನ್ಯೂಸ್ ಡೆಸ್ಕ್,
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ






