DistrictShivamogga

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೆ ಭುಗಿಲೆದ್ದ ಆಕ್ರೋಶ|ಬಕ್ರೀದ್ ದಿನ ಕಾಂಗ್ರೆಸ್‌ನಿಂದ ಟಗರು ಬಲಿ ಆರೋಪ|ರಸ್ತೆ ತಡೆ, ಟೈರ್‌ ಸುಟ್ಟು ಅಭಿಮಾನಿಗಳ ಪ್ರತಿಭಟನೆ

ತಮ್ಮ ಆರಾಧ್ಯ ನಾಯಕನ ರಾಜೀನಾಮೆಯನ್ನು ಒಪ್ಪದ ನೂರಾರು ಜನರು, ಶಿವಮೊಗ್ಗದ ಶಿವಪ್ಪನಾಯ್ಕ ವೃತ್ತದಲ್ಲಿ ಸಿದ್ದರಾಮಯ್ಯ ಭಾವಚಿತ್ರಹಿಡಿದು ಸಿಎಂ ಆಗಿ ಮುಂದುವರಿಯಬೇಕೆಂದು ಘೋಷಣೆ ಕೂಗಿದರು.

ಶಿವಮೊಗ್ಗ: ಸಿಎಂ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿರುವದನ್ನು ಖಂಡಿಸಿ ರಾಜ್ಯದ ವಿವಿದೆಡೆ ಅವರ ಅಭಿಮಾನಿಗಳು, ಅಹಿಂದ ಸಂಘಟನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಬಕ್ರೀದ್ ದಿನ ಕಾಂಗ್ರೆಸ್‌ನಿಂದ ಟಗರು ಬಲಿಕೊಟ್ಟಂತಾಗಿದೆ ಎಂದು ಅಹಿಂದ ಸಂಘಟನೆಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಡೆಗಳಿಗೆಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದ ಅವರ ಅಭಿಮಾನಿಗಳಿಗೆ ಕೊನೆಗೂ ಸಿದ್ದರಾಮಯ್ಯ ಗುರುವಾರದಂದು ರಾಜೀನಾಮೆ ನೀಡಿರುವದು ತೀವ್ರ ಅಸಮಾಧಾನ ಉಂಟು ಮಾಡಿದೆ.

ಇಂದು ಸಿದ್ದರಾಮಯ್ಯ ಲೋಕಭವನಕ್ಕೆ ತೆರಳಿ ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೇ ಅಹಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ತಮ್ಮ ಆರಾಧ್ಯ ನಾಯಕನ ರಾಜೀನಾಮೆಯನ್ನು ಒಪ್ಪದ ನೂರಾರು ಜನರು, ಶಿವಮೊಗ್ಗದ ಶಿವಪ್ಪನಾಯ್ಕ ವೃತ್ತದಲ್ಲಿ ಸಿದ್ದರಾಮಯ್ಯ ಭಾವಚಿತ್ರಹಿಡಿದು ಸಿಎಂ ಆಗಿ ಮುಂದುವರಿಯಬೇಕೆಂದು ಘೋಷಣೆ ಕೂಗಿದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ವಿರೋಧಿಸಿ ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ಹೊರಹಾಕಿದರು.

ಹಿಂದುಳಿದ ಸಮುದಾಯಗಳ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅವರ ರಾಜೀನಾಮೆ ಬೇಸರ ತಂದಿದೆ. ಹೈಕಮಾಂಡ್ ರಾಜೀನಾಮೆ ಪಡೆದಿದ್ದು ಸರಿಯಲ್ಲ ಎಂದು ಆಕ್ರೋಶಹೊರಹಾಕಿದರು.

ಕಾಂಗ್ರೆಸ್‌ ಹೈಕಮಾಂಡ್ ಪೂರ್ಣಾವಧಿಗೆ ಸಿಎಂ ಆಗಿ ಅಹಿಂದ ಸಮುದಾಯದ ನಾಯಕ ಸಿದ್ದರಾಮಯ್ಯನವರನ್ನ ಮುಂದುವರಿಸಬೇಕೆಂದು ಅವರ ಅಭಿಮಾನಿಗಳು ಮತ್ತು ಕನಕಸೇನೆ, ಕುರುಬ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು

ಅಹಿಂದ ಸಮುದಾಯಗಳನ್ನ ಒಗ್ಗೂಡಿಸಿರುವ ಹಲವು ಭಾಗ್ಯಗಳನ್ನ ನೀಡಿ, ಪಂಚಗ್ಯಾರಂಟಿ ನೀಡಿರುವ ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಿರ್ನಾಮವಾಗಲಿದೆ ಎಂದು ಕನಕ ಸೇನೆ ಅಧ್ಯಕ್ಷ ಸುರೇಶ್ ಕಿಡಿಕಾರಿದರು.

ಟಗರು ಎಂದೇ ಗುರುತಿಸುವ ಸಿದ್ದರಾಮಯ್ಯನವರನ್ನ ಪ್ರತಿನಿಧಿಸಿಸುವ ಟಗರುಗಳನ್ನ ಪ್ರತಿಭಟನೆ ವೇಳೆ ಸಾಂಕೇತಿಕವಾಗಿ ಪ್ರದರ್ಶಿಸಿದರು.

ಬಕ್ರೀದ್ ಹಬ್ಬದ ದಿನ ಟಗರು ಬಲಿಕೊಟ್ಟಂತೆ ಸಿದ್ದರಾಮಯ್ಯನವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂದು ಕುರುಬ ಸಂಘದ ವಾಟಾಳ್ ಮಂಜುನಾಥ್ ಆರೋಪಿಸಿದರು.

Follow Us

Leave a Reply

Your email address will not be published. Required fields are marked *

Back to top button