ಕಸ್ತೂರಿ ರಂಗನ್ ವರದಿ ವಿಚಾರ|ಕೇಂದ್ರದ ವಿರುದ್ದ ಈಸೂರಿನಿಂದ ಕಾಂಗ್ರೆಸ್ ಪಾದಯಾತ್ರೆ|ಬಿಜೆಪಿಯಿಂದಲೂ ಪ್ರತಿಭಟನೆ, ಸಂತ್ರಸ್ಥರಲ್ಲಿ ಮೂಡಿದ ಗೊಂದಲ
2013-18 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ, ವಾಪಸು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಬುಧವಾರದಂದು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ: ಕಸ್ತೂರಿ ರಂಗನ್ ವರದಿಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ಈಗಾಗಲೇ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೇ ಈ ಕುರಿತು ಚರ್ಚೆ ನಡೆಸಲು ವಿಧಾನಸಭೆ ಅಧಿವೇಶನ ಸಹ ಕರೆದಿದೆ.

ಈಗ ಲೇಟೇಸ್ಟಾಗಿ ಬಿಜೆಪಿ ಸಹ ನಾವು ಸಹ ಕಸ್ತೂರಿ ರಂಗನ್ ವರದಿ ವಿರೋಧಿಸುತ್ತೇವೆ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸೆಪ್ಟೆಂಬರ್ ದಿನಾಂಕ 10 ಹಾಗೂ 11 ರಂದು ಹಾಲಲಕ್ಕವಳ್ಳಿ ಹಾಗು ತೋಟದಗೆರೆಯಿಂದ ಪಾದಯಾತ್ರೆ ಹಮ್ಮಿಕೊಂಡಿದೆ.

ಈ ಮಧ್ಯೆ ಈಸೂರಿನಿಂದ ಸೆಪ್ಟೆಂಬರ್ 11 ರಂದು ಕಾಂಗ್ರೆಸ್ ಪಕ್ಷವು ಜಿಲ್ಲಾ ಸಚಿವ ಮಧು ಬಂಗಾರಪ್ಪ ಸಾರಥ್ಯದಲ್ಲಿ ಶಿಕಾರಿಪುರದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ಮಧು ಬಂಗಾರಪ್ಪ ಮನವಿ|
ರೈತ ವಿರೋಧಿಯಾದ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಲ್ಲಿ ಬಗರ್ಹುಕುಂ ರೈತರ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಎಂದಿಗೂ ಸಾಧ್ಯವೇ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲರೂ ಕಸ್ತೂರಿ ರಂಗನ್ ಈ ವರದಿಯನ್ನು ವಿರೋಧಿಸಲೇಬೇಕಾಗಿದೆ ಅನಿರ್ವಾಯತೆ ಇದೆ ಎಂದು ಹೇಳಿದ್ದಾರೆ.
ಈಸೂರಿನಿಂದ ನಡೆಯಲಿರುವ ಪ್ರತಿಭಟನೆಗೆ ರೈತಾಪಿ ವರ್ಗ ಸೇರಿದಂತೆ ಈ ಭಾಗದ ಸಮಸ್ತ ಜನರು ಭಾಗವಹಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಕಸ್ತೂರಿ ರಂಗನ್ ವರದಿ ವಿಚಾರ|
ಬಿಜೆಪಿ ಹೋರಾಟ ಯಾರ ವಿರುದ್ದ?
ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನಾ ಪಾದಯಾತ್ರೆಯು ಈ ಭಾಗದ ಜನರಲ್ಲಿ ಹಲವು ಗೊಂದಲಗಳನ್ನು ಮೂಡಿಸುವಂತೇ ಮಾಡಿದೆ.
ಅಸಲಿಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಹೊರಟಿರುವುದು ಕೇಂದ್ರದಲ್ಲಿ ಇರುವ ಬಿಜೆಪಿ ಸರ್ಕಾರ. ಮತ್ತು ವರದಿ ಜಾರಿಗೆಯ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ.
ಇನ್ನು ವರದಿ ಜಾರಿಗೆ ವಿಚಾರವಾಗಿ ಈ ಹಿಂದೆ ಕೇಂದ್ರ ಸರ್ಕಾರವು ಕರೆದಿದ್ದ ಸಭೆಯನ್ನು ಈ ಭಾಗದ ಜನಪ್ರತಿಗಳು ಗೈರು ಹಾಜರಿಯಾಗಿದ್ದರು ಎಂದು ಇತ್ತಿಚೆಗಷ್ಟೇ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದರು.

ಅಲ್ಲದೇ ಕೇಂದ್ರ ಸರ್ಕಾರವು ಈ ಭಾಗದ ಜನರನ್ನು ಆತಂಕದಲ್ಲಿ ದೂಡಿದೆ ಎಂದು ಮಂಗಳವಾರದಂದು ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಆರೋಪಿಸಿದ್ದರು.

ಹೀಗೆಲ್ಲಾ ಇರುವಾಗ ಈಗ ಏಕಾಏಕಿ ಬಿಜೆಪಿ ಸಹ ಪ್ರತಿಭಟನೆಗೆ ಧುಮುಕಿದೆ. ಆದರೆ ಬಿಜೆಪಿ ತನ್ನ ಹೇಳಿಕೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಬಿಡುವದಿಲ್ಲ ಎಂದಿದ್ದಾರೆ.
ಒಂದೆಡೆ ಈ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಎಂದು ಒಪ್ಪಿಕೊಳ್ಳುವ ಸ್ತಳೀಯ ಬಿಜೆಪಿ ಘಟಕವು ರಾಜ್ಯ ಸರ್ಕಾರವು 7ನೇ ಅಧಿಸೂಚನೆ ಹೊರಡಿಸಿದೆ. ಇದರಿಂದ ಮಲೆನಾಡಿನ ಭಾಗದ ಜನರಲ್ಲಿ ಗೊಂದಲ, ಆತಂಕ ಉಂಟಾಗಿದೆ ಎಂದು ಬುಧವಾರದಂದು ಶಿವಮೊಗ್ಗದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮತ್ತೂರು ಆರೋಪಿಸಿದ್ದಾರೆ.
ಬಿಜೆಪಿಯಿಂದ ಎರಡು ದಿನ ಪಾದಯಾತ್ರೆ|
ಸೆ.10 ರಂದು ಹಾಲಲಕ್ಕವಳ್ಳಿಯಿಂದ ಆರಂಭಗೊಳ್ಳಲಿರುವ ಬಿಜೆಪಿ ಪಾದಯಾತ್ರೆಯು ಅಂದು ಸಂಜೆ ಲಕ್ಕಿನಕೊಪ್ಪ ಸರ್ಕಲ್ಗೆ ಬಂದು ಅಂತ್ಯಗೊಳ್ಳಲಿದೆ.

ಮರುದಿನ ಸೆ. 11ಕ್ಕೆ ತೋಟದಕೇರೆಯಿಂದ ಆರಂಭಗೊಂಡು ಸಂಜೆ 5.30ಕ್ಕೆ ಕಾಕನಹಸೂಡಿ ತಲುಪಲಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹರಿಪೃಷ್ಣ ಮತ್ತೂರು ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಜೊತೆ ಬಿಜೆಪಿ ಎಂದು ಕೈಜೋಡಿಸುವದಿಲ್ಲ ಎಂದು ಹೇಳಿದರು.
ಯಾರು? ಯಾರ ವಿರುದ್ದ ಹೋರಾಟ!
ಬಚಾವಾಗುತ್ತ ಮಲೆನಾಡು?
ಈ ಹಿಂದೆ 2013-18 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ, ವಾಪಸು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಬುಧವಾರದಂದು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಆದರೆ ಕೇಂದ್ರ ಸರ್ಕಾರವು ಮಲೆನಾಡಿನ ಮೇಲೆ ಸವಾರಿ ಮಾಡಲು ಮುಂದಾಗಿರುವದರಿಂದ ಈ ಭಾಗದ ಜನರ ಹಿತದೃಷ್ಟಿ ಕಾಪಾಡಲು ಕಾಂಗ್ರೆಸ್ ಪಕ್ಷವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.
ಮತ್ತು ಈಗಾಗಲೇ ಘೋಷಿಸಿದಂತೇ ಸೆಪ್ಟೆಂಬರ್ 11ರಂದು ಈಸೂರಿನಿಂದ ಪ್ರತಿಭಟನಾ ಮೆರವಣಿಗೆ ಘೋಷಿಸಿದೆ.
ಆ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಸೆಡ್ಡು ಹೊಡೆಯಲು ಮುಂದಾಗಿದೆ. ಇನ್ನು ಬಿಜೆಪಿ ತರಾತುರಿಯಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸದೇ ಇರುವುದು ಜನರಲ್ಲಿ ಹಲವು ಅನುಮಾನ, ಗೊಂದಲವಂತೂ ಉಂಟು ಮಾಡಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







